ಕೆಲವು ದಶಕಗಳ ಹಿಂದೆ ಹಾಗೂ ಶತಮಾನಗಳ ಹಿಂದೆ ವಾಸಿಸುತ್ತಿದ್ದ ಜನರಲ್ಲಿ ಮೂಢನಂಬಿಕೆ ಮನೆ ಮಾಡಿತ್ತು ಎಂದರೆ ತಪ್ಪಾಗುವುದಿಲ್ಲ. ಆ ಜನರಲ್ಲಿ ಮೂಡನಂಭಿಕೆಯನ್ನು ಹೋಗಲಾಡಿಸಲು ರಾಜಾರಾಂ ಮೋಹನ್ ರಾಯ್, ಭಕ್ತಿ ಭಂಡಾರಿ ಬಸವಣ್ಣ, ಸ್ವಾಮಿ ವಿವೇಕಾನಂದರು ಸೇರಿದಂತೆ ಹಲವೂ ಮಹನೀಯರು ತುಂಬಾ ಶ್ರಮಿಸಿರುವುದು ನಮಗೆಲ್ಲಾ ತಿಳಿದ ವಿಷಯವೇ ಸರಿ.
ಈಗ ನಾವೆಲ್ಲರೂ "ಮಾಹಿತಿ ತಂತ್ರಜ್ಞಾನ ಯುಗ" ಎಂದೇ ಕರೆಯಲಾಗುವ ಈ ಕಾಲದಲ್ಲಿ ಬುದ್ದಿಜೀವಿಗಳಾಗಿ (ಅತಿ ಬುದ್ದಿವಂತರಾಗಿ) ಇದ್ದೇವೆ ನಾವು ತಿಳಿದುಕೊಂಡಿದ್ದೇವೆ. ವಿಜ್ಞಾನವು ಇಷ್ಟೆಲ್ಲಾ ಮುಂದುವರೆದರೂ, ನಾವು ಜ್ಞಾನಿಗಳಾಗಿದ್ದರೂ ಇನ್ನೂ ಮೌಢ್ಯತೆಯ ನೆರಳಲ್ಲಿ ಇರುವುದು ನೆನೆದರೆ ಭಯವೆನಿಸುತ್ತದೆ. ಇತ್ತೀಚಿನ ದಿನಗಳವರೆಗೂ ಬಾಲ್ಯವಿವಾಹಗಳು ನಿಂತಿಲ್ಲ, ಮಾಟ-ಮಂತ್ರಗಳು ನಿಂತಿಲ್ಲ (ಚುನಾವಣೆಗಾಗಿ ವಿಶೇಷ ಮಾಟ-ಮಂತ್ರಗಳು), ಮಡೆಸ್ನಾನಗಳು ನಿಂತಿಲ್ಲ ಅಲ್ಲದೇ ಇನ್ನೂ ಅನೇಕ ಮೌಡ್ಯತೆಗಳು ನಿಲ್ಲದೇ ಸಾಗುತ್ತಿವೆ. ವಿಪರ್ಯಾಸವೆಂದರೆ ಈ ಮೌಡ್ಯತೆಯ ಹಾದಿ ತುಳಿಯುತ್ತಿರುವವರು ಬುದ್ದಿಜೀವಿಗಳೇ, ಇದರಿಂದಾಗುವ ಲೋಪಗಳನ್ನು ಅರಿತವರೇ..?
ಇಂತಹ ಕಾಲದಲ್ಲೂ ಈ ಮೌಡ್ಯತೆಯ ಭಯಾನಕತೆಯ ಬಗ್ಗೆ, ಇನ್ನೂ ಮೌಢ ಆಚರಣೆಯ ನಡೆಯುತ್ತಿವೆಯೇ ಎನ್ನುವುದರ ಬಗ್ಗೆ ನೀವೇನು ಹೇಳಲಿಚ್ಚಿಸುವಿರಿ. ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಈ ಕೆಳಗೆ ಕಾಮೆಂಟು ಮಾಡಿ. ಈ ಚರ್ಚೆಯಲ್ಲಿ ಪಾಲ್ಗೋಳ್ಳಿ.....